circle-image

Swarna Nrisimha Datta
Sai Peetika Seva Trust ®

Explore More >>>

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಎಲ್ಲರಂತೆ ಸಾಧಾರಣವಾಗಿ ಬೆಳೆದರು. ಮೃದುಹೃದಯಿ, ಹಸನ್ಮುಖಿ ಅವರು. ಯಾರನ್ನೂ ನೋಯಿಸುತ್ತಿರಲಿಲ್ಲ. ಆದರೆ ಅವರೊಳಗಿನ ಗುರುಭಾವವನ್ನು, ಅಂತಃಶಕ್ತಿಯನ್ನು ಪ್ರಕಟಮಾಡಲಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ, ಸಸಿಯಾಗಿ ಮರವಾಗಿ ಹಣ್ಣು ಹೂವಾದಿಗಳನ್ನು ಬಿಡುವುದಲ್ಲವೇ, ಯೋಗ್ಯವಾದ ಸಮಯಕ್ಕೆ ಮರಗಳು ಫಲಕೊಡುವುದು ಅಲ್ಲವೇ.

ಹಾಗೆಯೇ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಗುರುರೂಪವಾಗಿ ಪ್ರಕಟವಾಗಲು ದಿನ ಸಮಯ ಮುಹೂರ್ತ ಪೂರ್ವ ನಿರ್ಧರಿತವಾಗಿತ್ತು. ಮೊದಲಿನಿಂದಲೂ ಗುರುಗಳ ಅಮ್ಮ ಶ್ರೀಮತಿ ರಂಗಲಕ್ಷ್ಮಿಯವರು ದತ್ತನ ಭಕ್ತೆಯಾಗಿದ್ದರು. ಗುರುಚರಿತ್ರೆ ಪಾರಾಯಣ ಮಾಡುತ್ತ ಇದ್ದರು. ಇವರ ಮನೆಯಲ್ಲಿ ಪ್ರತಿ ಗುರುವಾರ ಸಾಯಿಬಾಬಾರ ಆರತಿ, ಪೂಜೆ ಪ್ರಸಾದವಿನಿಯೋಗ ಭಕ್ತಿಭಾವದಿಂದ ನಡೆಯುತ್ತಾ ಬಂದಿದ್ದವು. ಗುರುನಿವಾಸದ ಸಕಲ ಗುರುವರ್ಯರ ಪ್ರತಿಮೆಗಳಿಗೆ ಹಾಗೂ ಭಾವಚಿತ್ರಗಳಿಗೆ ವಿವಿಧ ಹೂಗಳಿಂದ ಭವ್ಯವಾಗಿ ಅಲಂಕಾರ ಮಾಡುತ್ತಿದ್ದರು. ಗುರುಭಜನೆಯು ಭಕ್ತಿಭಾವದಿಂದ ನೆರವೇರುತ್ತಿತ್ತು. ಅಲೌಕಿಕ ಕಾಂತಿಯನ್ನು ನೋಡುವುದೇ ಒಂದು ಸೌಭಾಗ್ಯ. ನಂತರ ಗುರುಗಳ ದರ್ಶನ. ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿ ಭಕ್ತರು ಹೊರಡುತ್ತಿದ್ದರು. ಇದು ಪ್ರತಿ ಗುರುವಾರವೂ ವ್ರತದಂತೆ ನಡೆದುಬಂದಿತ್ತು.

Know More >>
arjun-guruji